Sunday, March 10, 2013

ಭಾವಗಳ ಗಾನ, ಕೆಂಬಣ್ಣದ ಬಾನ
ಹ್ರದಯದ ಮೈದಾನವೀಗ ಸ್ಮಶಾನ
ಪ್ರಣಯದ ಗುರಿಯೀಗ ಬಲು ದೂರ
ಸೇರುವೆನೆಂದೊ ಭಾವಗಳ ತೀರ
ಮನದ ಹಂಬಲಗಳು ಉಕ್ಕುಕ್ಕಿ
ಸಾಗಿದೆ ಹ್ರದಯದ ಪಯಣ ಪಲ್ಲಕ್ಕಿ
ಬರದ ಯಾತನೆ, ಮನದ ವೇದನೆ
ಕಾಣದಾಗಿದೆ ವಿಧಿಯ ಯೋಜನೆ
ಹಣೆಯ ಬಾಗು, ಜೀವದ ಬೇಗು
ಕೇಳಿಸದೆ ಯಾರಿಗು ನಾಭಿಯ ಕೂಗು
ಉರಿವ ಕಿಚ್ಚಿನಲಿ ಬೆಂದಿದೆ ಕರುಳು
ಎಂದು ಮೂಡಿತೋ ಜೀವ-ಭಾವಕೆ ನೆರಳು........!

No comments:

Post a Comment