Wednesday, May 30, 2012

   ಮಾನ್ಯ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಶಿಖಂಡಿಗೆ ಪ್ರಶಾಂತ್ ಭೂಶಣ್ ಹೋಲಿಸಿದ್ದು ಈಗ ರಾಷ್ಟ್ರಮಟ್ಟದಲ್ಲಿ ವಿಪರೀತ ಚರ್ಚೆಯಾಗುತ್ತಾ ಇದೆ. ಖಂಡಿತವಾಗಿಯೂ ಇದು ಚರ್ಚೆಯ ವಿಶಯವೇ. ಒಂದು ದೇಶದ ಅತ್ಯುನ್ನತ ಪದವಿಯನ್ನು ಹೊಂದಿದ ವ್ಯಕ್ತಿಯನ್ನು ಈ ರೀತಿ ಜರಿದಾಗ ಅದು ದೇಶಕ್ಕೇ ಅವಮಾನ. ಆದರೆ ಈ ಅವಮಾನ ದೇಶಕ್ಕೆ ಈಗ ಉಂಟಾಗಿದ್ದೇ..?? ಖಂಡಿತ ಅಲ್ಲ ೨೦೦೪ರ ಚುನಾವಣೆಯ ನಂತರ  ಇದೇ ಮನಮೋಹನ ಸಿಂಗ್ ದೇಶವನ್ನಾಳಿದರು(?). ಈಗಲೂ ಅದೇ ಪದವಿಯಲ್ಲಿ ಇದ್ದಾರೆ. ದೇಶದ ಪ್ರಧಾನಿಯಾಗಿ ಅವರು ಗೌರವಕ್ಕೆ ಅರ್ಹರು. ಹೆಸರಾಂತ ಆರ್ಥಿಕ ತಜ್ನ,ಪ್ರಾಮಾಣಿಕ,ಸಾತ್ವಿಕ ಸಾದು ಸಜ್ಜನ ಎಂದೆಲ್ಲ ಅವರು ಹೆಸರುವಾಸಿ. ವೈಯಕ್ತಿಕವಾಗಿ ಅವರು ಹೌದು ಕೂಡ.
    ವಿಷಯಕ್ಕೆ ಬರೋಣ. ಆರ್ಥಿಕ ತಜ್ನನ ದೇಶದಲ್ಲಿ ಒಪ್ಪೊತ್ತಿಗೆ ಊಟಕ್ಕೆ ಗತಿ ಇಲ್ಲದ ಕೋಟಿ ಜನರಿದ್ದಾರೆ. ಕನಿಷ್ಟ ಮೂಲಸೌಕರ್ಯ ಇಲ್ಲದ ಅದೆಷ್ಟೋ ಹಳ್ಳಿಗಳಿವೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನ ಪರದಾಡುತ್ತಿದ್ದಾರೆ. ಬಡವರ್ಗವನ್ನು ಬಿಡಿ, ಮಧ್ಯಮವರ್ಗದವರೇ ದಿನಕಳೆಯಲು ಹರಸಾಹಸ ಪಡುವಂತಾಗಿದೆ. ದೇಶದ ಆರ್ಥಿಕ ಮಟ್ಟ ಕುಸಿದು ಮಣ್ಣು ಪಾಲಾಗಿದೆ. ಸಂಪತ್ತಿನ ಕೇಂದ್ರೀಕರಣ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಕಪ್ಪು ಹಣ ಎರ್ರಾಬಿರ್ರಿ ಕೇಂದ್ರೀಕೃತವಾಗುತ್ತಾ ಇದೆ. ಈಗ ಹೇಳಿ ಈ ವ್ಯಕ್ತಿ ಆರ್ಥಿಕ ತಜ್ನನಾಗಿ ದೇಶಕ್ಕಾದ ಲಾಭ ಏನು..??
ಕಳೆದ ೮ ವರ್ಷದಲ್ಲಿ ಗಮನಾರ್ಹವಾದ ಯಾವ ಬದಲಾವಣೆ ದೇಶದಲ್ಲಿ ಆಗಿದೆ..?? ಬಡತನ,ಜನಸಂಖ್ಯೆ,ಬ್ರಷ್ಟಾಚಾರ ಇವು ದೇಶದ ಅತಿ ದೊಡ್ಡ ಸಮಸ್ಯೆಗಳು. ಇವುಗಳಲ್ಲಿ ಯಾವುದಾದರೊಂದನ್ನು ಮಾನ್ಯ ಮನಮೋಹನ್ ಸಿಂಗ್ ತಡೆಗಟ್ಟಿದ್ದಾರೆಯೇ..?? ಹೋಗಲಿ ಅದಕ್ಕಾಗಿ ಪ್ರಯತ್ನಿಸಿದ್ದಾರೆಯೆ..?? ಜನಲೋಕಪಾಲ್ ಬಿಲ್ ಜಾರಿಗೊಳಿಸುವ ವಿಶಯದಲ್ಲಿ ಅವರ ನಿಲುವನ್ನು ನಾವು ಕಂಡಿದ್ದೇವೆ. ಇದೆಲ್ಲ ಹೋಗಲಿ. ಕಳೆದ ಕೆಲವು ಸಮಯ ಹಿಂದೆ ಯುಪಿಎ ಅಧ್ಯಕ್ಷೆ ಎಂದು ಕರೆಸಿಕೊಳ್ಳುವ ವಿದೇಶಿ ನಾರಿ ಅನಾರೋಗ್ಯ ಬಿದ್ದಾಗ ನಮ್ಮ ದೇಶದಲ್ಲಿ ಚಿಕಿತ್ಸೆಗೆ ಆಸ್ಪತ್ರೆಯೇ ಇರಲಿಲ್ಲ..!! ಇನ್ನು ಈ ದೇಶದ ಬಡ ದೇಶವಾಸಿಗಳ ಗತಿ ಏನು..??
ಮಾಹಿತಿ ತಂತ್ರಜ್ನಾನದ ಈ ಯುಗದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ದೇಶಕ್ಕೆ ಕೊಟ್ಟಿರುವ ಅಭೂತಪೂರ್ವ ಉಡುಗೊರೆ ಏನು..?? ಒಂದಶ್ಟು ರಸ್ತೆ ದುರಸ್ತಿ, ಒಂದಶ್ಟು ಹೊಸ ಕಾನೂನುಗಳು, ಒಂದಶ್ಟು ವಿದೇಶ ಪ್ರವಾಸ, ಚಿತ್ರ-ವಿಚಿತ್ರ ಬಜೆಟ್ ಮಂಡನೆ ಮಾಡೊದೇ ಇವರ ಕೆಲಸವಾದರೆ ಅದಕ್ಕೆ ಈ ಪ್ರಾಮಾಣಿಕ,ಸಜ್ಜನನ ಅಗತ್ಯವಿತ್ತೇ..?? ಈ ವ್ಯಕ್ತಿ ದೇಶಕ್ಕಾಗಿ ಪ್ರಧಾನಿ ಪದವಿಯಲ್ಲಿ ಕುಳಿತು ಮಾಡಿದ ಮಹಾನ್ ಸಾಧನೆಯಾದರು ಏನು..??
  ಪ್ರಧಾನಿಯಾಗಿ ಮನಮೋಹನ್ ಸಿಂಗ್ ವರ್ತನೆ ಒಂದು ಸಾಮಾನ್ಯ ಪ್ರಜೆಯಂತಾಗಿದೆ. ಒಬ್ಬ ಈ ದೇಶದ ಪ್ರಜೆ ಹೇಗೆ ತನ್ನ ನೈತಿಕತೆಯ ಕಣ್ಣನ್ನು ಮುಚ್ಚಿ ಜೀವನ ನಡೆಸುತ್ತಾನೋ ಹಾಗೆಯೇ ಸಿಂಗ್ ಕೂಡ ಜೀವಿಸುತ್ತಿದ್ದಾರೆ. ಆದರೆ ಇದಕ್ಕಾಗಿ ಅವರಿಗೆ ಪ್ರಧಾನಿ ಪದವಿಯ ಅಗತ್ಯವಿತ್ತೇ.??ಅಪರಾಧ ಮಾಡುವುದು ಕಾನೂನು ಬಾಹಿರ,ಹಾಗೆಯೆ ಅಪರಾಧ ನೋಡಿಕೊಂಡು ಸುಮ್ಮನೆ ಕುಳಿತಿರುವುದೂ ಕಾನೂನು ಬಾಹಿರ. ಈ ಸಂಧರ್ಭದಲ್ಲಿ ನಮ್ಮ ಪ್ರಧಾನಿ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರಲ್ಲವೆ? ನಾನು ತಪ್ಪು ಮಾಡಲಾರೆ, ಇನ್ನೊಬ್ಬರ ತಪ್ಪನ್ನು ನಿಲ್ಲಿಸಲಾರೆ ಎಂಬಂತೆ ಅವರ ವರ್ತನೆ ಇರುವುದು ನಿಜವಲ್ಲವೇ.? ತಪ್ಪು ಮಾಡಲಿಲ್ಲ ಎಂಬುದು ಪ್ರಶಂಸನಾರ್ಹವಾದರೆ,ತಪ್ಪುಗಳನ್ನು ಅಧಿಕಾರವಿದ್ದೂ ನಿಲ್ಲಿಸಲಿಲ್ಲ ಎಂಬುದು ಅಷ್ಟೇ ಖಂಡನೀಯ. ಹೀಗಿದ್ದೂ ಅವರನ್ನು ಪ್ರಾಮಾಣಿಕ ಎಂದು ಯಾವ ಅರ್ಥದಲ್ಲಿ ಕರೆಯಬಹುದು.?ಭ್ರಷ್ಟಾಚಾರ ಮಾಡಿಲ್ಲ ಎಂದು ಎದೆಯುಬ್ಬಿಸಿ ಸಿಂಗ್ ಹೇಳುತ್ತಾರೆ. ಅವರೊಬ್ಬ ಸಾಮಾನ್ಯ ರಾಜಕಾರಣಿಯಾಗಿದ್ದರೆ ಅವರನ್ನು ನಾವು ಪ್ರಶಂಸೆ ಮಾಡಬೇಕು ನಿಜ. ಒಬ್ಬ ಪ್ರಧಾನಿಯಾಗಿ ಅವರು ಯಾವ ನೈತಿಕತೆಯಲ್ಲಿ ಹೀಗೆ ಹೇಳಿದರೋ ತಿಳಿಯದು. ಭ್ರಷ್ಟಾಚಾರ ಮಾಡದೇ ಇರುವುದೇ ಒಂದು ಸಾಧನೆ ಎಂದು ತಿಳಿದಿದ್ದಾರೆ ಪಾಪ. ಪ್ರಧಾನಿಯಾಗಿ ಭ್ರಷ್ಟಾಚಾರ ಹತ್ತಿರವೂ ಸುಳಿಯಬಾರದು. ಇಂತಿರುವಾಗ ನಾನು ಮಾಡಿಲ್ಲ ಎಂದು ಹೇಳುವುದರಲ್ಲಿ ಏನು ಅರ್ಥ..?? ಸರಿ ಈ ದೇಶದಲ್ಲಿ ಅದ್ದೂ ಕೂಡ ಒಂದು ಸಾಧನೆ ಎಂದು ಪರಿಗಣಿಸೋಣ. ಒಬ್ಬ ಪ್ರಧಾನಿಯಾಗಿ ಭ್ರಷ್ಟಾಚಾರ ತಡೆಯಲು ಅವರು ಮಾಡಿದ ಕನಿಷ್ಟ ಪ್ರಯತ್ನವಾದರೂ ಏನು.? ಇಷ್ಟಿದ್ದೂ ಮಾನ್ಯ ಮನಮೋಹನ್ ಸಿಂಗ್ ಅವರೇ ನಿಮ್ಮನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ..?? ನೀವೊಬ್ಬ ಪ್ರಾಮಾಣಿಕ ಎಂದು ಹೇಗೆ ಕರೆಸಿಕೊಳ್ಳುತ್ತೀರಿ..?
ಇನ್ನು ಹೇಳಿ ಸಿಂಗ್ ಅವರೇ ನೀವು ಯಾವ "ಶಿಖಂಡಿ"ಗಿಂತ ಕಮ್ಮಿ..?

Sunday, May 27, 2012

ದೇಶಕ್ಕೆ ಎನೂ ಮಾಡದೇ ಇರುವುದೂ ಒಂದು ರೀತಿಯ ದೇಶದ್ರೋಹವೇ. ಇಂಥ ಸಂಧರ್ಭದಲ್ಲಿ ನಮ್ಮಲ್ಲನೇಕರು ದೇಶದ್ರೋಹಿಗಳು ಎನ್ನುವ ಮಾತು ಸತ್ಯ.ಒಂದು ವೇಳೆ ಈಗ ಗಾಂಧೀಜಿ ಬದುಕಿದ್ದು ದೇಶಸೇವೆ ಮಾಡುತ್ತಿದ್ದರೆ ಇಂದಿನ ಬುದ್ಧಿಜೀವಿಗಳು ಅದರಿಂದ ಅವರಿಗಾಗುವ ಲಾಭವೇನು ಎಂದು ಲೆಕ್ಕ ಹಾಕಿ, ಪತ್ರಿಕೆಯೊಂದರಲ್ಲಿ ಪುಟಗಟ್ಟಲೆ ಲೇಖನ ಬರೆಯುತ್ತಿದ್ದರು. ಟಿವಿ ಮಾಧ್ಯಮಗಳಲ್ಲಿ  ಒಂದುವರೆ ಗಂಟೆ(ಜಾಹೀರಾತು ಸಮೇತ) ಅವರ ದೇಶಪ್ರೇಮದ ಮಾಪನ ನಡೆಯುತ್ತಿತ್ತು. ಸಾಮಜಿಕ ತಾಣಗಳಾದ ಫೇಸ್ ಬುಕ್,ಟ್ವಿಟ್ಟರ್ ಗಳಲ್ಲಿ ಅದೆಷ್ಟೋ ಮಾತಿನ ಯುದ್ಧವೇ ನಡೆದು ಹೋಗುತ್ತಿತ್ತು. ಇಂಥ ದೇಶವಾಸಿಗಳನ್ನು ಬದಲಿಸಲು ಸಾಧ್ಯವೇ..???
     ದೇಶವನ್ನು ಬದಲಿಸಲು ಹೊರಟವರಿಗೆ ಅರಿವಾಗಬೇಕಾದ ಸತ್ಯ ಎನೆಂದರೆ ಅವರು ಬದಲಿಸಬೇಕಾದ್ದು ದೇಶವನ್ನಲ್ಲ, ಬದಲಾಗಿ ಈ ದೇಶವಾಸಿಗಳನ್ನು. ದಾರಿಯಲ್ಲಿ ನೀವು ನಡೆದು ಹೋಗುವಾಗ ಕಂಡ ಕಸವನ್ನು ಎತ್ತಿ ಬುಟ್ಟಿಗೆ ನೀವು ಹಾಕಿದಿರಾದರೆ ಸುತ್ತಲಿನವರು ನಿಮ್ಮನ್ನು ಹುಚ್ಚ ಎಂದು ಛೇಡಿಸುತ್ತಾರೆ. ಅದು ವಾಸ್ತವ. ದೇಶವನ್ನು ಬದಲಿಸುತ್ತೇನೆ ಎಂದು ಹೊರಟವರ ಅತ್ಮಸ್ತೈರ್ಯವನ್ನೆ ಕುಗ್ಗಿಸುವ ಪ್ರಯತ್ನ ಇಂದಿನ ಬುದ್ಧಿಜೀವಿಗಳು ಬಹಳ ಘನಕಾರ್ಯದಂತೆ ಗೌರವಯುತವಾಗಿ ಮಾಡುತ್ತಾರೆ. ಇಂಥವರ ಜತೆ ವಾದ ಮಾಡುವುದು ಕೂಡ ಅಸಾಧ್ಯ. ಯಾಕೆಂದರೆ  ಇವರುಗಳು ಮಾತಿನ ಮಲ್ಲರು. ತಾನೊಬ್ಬ ಅತಿಮಾನುಶ ಬುದ್ಧಿಜೀವಿ ಎಂದು ತೋರಿಸಿಕೊಳ್ಳುವ ತವಕ ಇವರಲ್ಲಿ ಇರುತ್ತದೆ.
      ಈ ಮಾತುಗಳು ನಾನು ಯಾಕೆ ಹೇಳುತ್ತಿದ್ದೇನೆಂದರೆ "ಸತ್ಯಮೇವ ಜಯತೆ" ಎನ್ನುವ ಕಾರ್ಯಕ್ರಮವೊಂದನ್ನು ಚಿತ್ರರಂಗದ ನಟ ಆಮೀರ್ ಖಾನ್ ನಡೆಸಿಕೊಂಡು ಬರುತ್ತಿದ್ದಾರೆ. ದೇಶದ ಸಮಸ್ಯೆಗಳ ಮೇಲೊಂದು ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನವೊಂದನ್ನು ಆತ ಮಾದಿದ್ದಾನೆ. ನನಗಂತೂ ಆತನ ಪ್ರಯತ್ನದಲ್ಲಿ ಯಾವ ಹುಳುಕೂ ಕಾಣಿಸುತ್ತಿಲ್ಲ. ಹಣವೊಂದೇ ಅವನಿಗೆ ಮುಖ್ಯವಲ್ಲ ಎಂಬುದನ್ನು ಆತನನ್ನು ಸರಿಯಾಗಿ ಅವಲೋಕಿಸಿದರೆ ತಿಳಿದೀತು.ಇತ್ತೀಚೆಗೆ ಸಾಮಾಜಿಕ ಕಳಕಳಿಯುಳ್ಳ ಆತನ ಚಿತ್ರಗಳು ಅನೇಕವನ್ನು ನಾವು ನೋಡಿದ್ದೇವೆ. ಹಜಾರೆ ದಿನಗಟ್ಟಲೆ ಉಪವಾಸ ಕುಳಿತಾಗ ಯಾವೊಬ್ಬ ನಟನಾಗಲೀ, ಗಣ್ಯನಾಗಲೀ ಅತ್ತ ಸುಳಿಯಲಿಲ್ಲ. ಆಮೀರ್ ಖಾನ್ ಹಜಾರೆಯೊಂದಿಗೆ ಸಮಯ ಕಳೆದು ದೇಶಕ್ಕಾಗೆ ಕೈಜೋಡಿಸಿದ್ದು ಸುಳ್ಳಲ್ಲ.
ಏನೇ ಇರಲಿ,ಆತನೊಬ್ಬ ಭಾರತೀಯ, ದೇಶದ ಬಗ್ಗೆ ಮಾತನಾದುವ ಹಕ್ಕು ಅವನಿಗೆ ಇದೆ ಎಂಬುದು ನಾವು ಒಪ್ಪಲೇಬೇಕಾದ ಸತ್ಯ. ಆ ಹಕ್ಕನ್ನು ಅವನಿಂದ ಕಸಿಯಲು ನಾವ್ಯಾರು ನೀವ್ಯಾರು..??
          ಕಳೆದ ಮೂರ್ನಾಲ್ಕು ಅಧ್ಯಾಯಗಳಲ್ಲಿ ಅನಾವಶ್ಯಕ ಮತ್ತು ನಿರುಪಯೋಗವಾದ್ದನ್ನು ಯಾವುದನ್ನೂ ಆತ ಹೇಳಿಲ್ಲ ಅಂದುಕೊಳ್ಳುತ್ತೇನೆ. ಹೀಗಿದ್ದಮೇಲೂ ಟೀಕೆಗಳು ನಿಂತಿಲ್ಲ. ಹಣಕ್ಕಾಗಿ ಆತ ಮಾದುತ್ತಿದ್ದಾನೆ ಎಂದು ಟೀಕಾಕಾರರು ಮಾಡುತ್ತಿರುವ ಆರೋಪ ನಿರಾಧಾರ. ನಿಜ ಜಾಹೀರಾತುದಾರರಿಂದ ಅವನಿಗೆ ಹಣ ಬರುತ್ತಿರಬಹುದು. ಆದರೆ ಈ ಕಾರ್ಯಕ್ರಮಕ್ಕಾಗಿ ಆತ ಮಾಡುತ್ತಿರುವ ಖರ್ಚಿನ ಬಗ್ಗೆ ಯಾರಿಗಾದರು ಗೊತ್ತೇ..?? ಕ್ಯಾಮೆರಾ ಹಿಡುಕೊಂಡು ದೇಶಸುತ್ತುವ ಆತನ ತಂಡ ಪಡುತ್ತಿರುವ ಕಷ್ಟ ಏನು ಅಂತ ಗೊತ್ತೇ..? ಇದಕ್ಕೆಲ್ಲಾ ತಗಲುವ ಖರ್ಚು ಎಲ್ಲಿಂದ ಬರಬೇಕು..?? ಜಾಹಿರಾತಿನಿಂದ ಬರುವ ಹಣ ಅದಕ್ಕಾಗಿ ಉಪಯೋಗಿಸುತ್ತಿರಬಹುದು ಆಮೀರ್. ಜಾಹೀರಾತು ಇಲ್ಲದೆ ಕಾರ್ಯಕ್ರಮ ನಡೆಸುವ ಅನಿವಾರ್ಯತೆ ಏನಿದೆ? ಅಥವಾ ಹಣ ಅವನ ಜೇಬಿನಿಂದ ಭರಿಸಲಿ ಎಂದು ಯಾವುದಾದರು ಬುದ್ಧಿಜೀವಿ ವಾದಿಸಿದರೆ ಆ ಜೀವಿ ದೇಶಕ್ಕಾಗಿ ವಿನಿಯೋಗಿಸಿದ ಹಣವೆಷ್ಟು ಎಂಬುದನ್ನು ಪರಾಮರ್ಶಿಸಲಿ.
         ಆಮೀರ್ ಖಾನ್ ವ್ಯವಸ್ತೆಯನ್ನು ಬದಲಿಸಬೇಕೆಂದು ಹೊರಟಿದ್ದಾನೆ.ನಿಜ ಅಲ್ಲಿ ಹುಳುಕಿದೆ. ಆದ್ರೆ ಆತ ನಿಜವಾಗಿಯೂ ಬದಲಿಸಬೇಕಾದು ಈ ದೇಶದ ಜನರನ್ನು,ಅವರ ಮನಸ್ಸನ್ನು. ಪ್ರತಿಯೊಂದನ್ನು ಲಾಭನಷ್ಟದ ದೃಷ್ಟಿಕೋನದಿಂದಲೇ ಅಳೆಯುವ ಈ ದೇಶವಾಸಿ ಅನಾಗರೀಕ ಬುದ್ಧಿಜೀವಿಗಳನ್ನು ಬದಲಿಸಬೇಕಾದ ಅನಿವಾರ್ಯತೆ ಇದೆ.ಇಲ್ಲದೇ ಹೋದರೆ ಈ ದೇಶ ಹೀಗೇ ಉಳಿಯಲಿದೆ. ಮಗು ಹುಟ್ಟುವಾಗೆಲೇ ಅದರ ಮುಂದೆ ಈ ವ್ಯವಸ್ಥೆ ವಾತಾವರಣ ಇರುತ್ತದೆ. ಉತ್ತಮ ಸಮಾಜ,ದೇಶ ಹೇಗಿರುತ್ತದೆ ಎಂಬ ಅರಿವು ಆ ಮಗೂಗೆ ಇರಲ್ಲ. ಹಾಗಿರುವಾಗ ಆ ಮುಗು ಅನಾಗರಿಕ ಸಮಾಜದ ಅಂಗವಾಗುತ್ತದೆಯೇ ಹೊರತು, ಸಮಾಜದಲ್ಲಿ ನಾಗರೀಕತೆಯ ಬೀಜ ಬಿತ್ತನೆ ಅದರಿಂದ ಅಸಾಧ್ಯ. ದೇಶವಾಸಿಗಳೇ ದಯವಿಟ್ಟು ಎಲ್ಲವನ್ನೂ ಲಾಭನಷ್ಟದ ದೃಷ್ಟಿಕೋನದಿಂದ ಅಳೆಯುವುದನ್ನು ಬಿಟ್ಟುಬಿಡಿ. ಪ್ರತಿಯೊಬ್ಬರೂ ಬುದ್ಧಿಜೀವಿಗಳೇ ಆದರೆ ನಿಮ್ಮ ಬುದ್ಧಿಯ ಅತಿಪ್ರದರ್ಶನದ ಅಗತ್ಯ ದೇಶಕ್ಕೆ ಇಲ್ಲ. ಸಾಧ್ಯವಾದರೆ ಆಮೀರ್ ನಂತೆ ದೇಶಕ್ಕೆ ನಿಮ್ಮಿಂದಾಗುವ ಸೇವೆ ಸಲ್ಲಿಸಿ.ನಿಮ್ಮನ್ನು ನೀವು ಬದಲಿಸಿಕೊಳ್ಳಿ. ಇಲ್ಲಾಂದ್ರೆ ಚಾನೆಲ್ ಚೇಂಜ್ ಮಾಡಿ......