Friday, March 15, 2013

ಇರುಳಿಗೆಲ್ಲಿಯ ಕಿರಣಗಳ ಕಾಂತಿ
ಹುಡುಕುವೆನೆಂತು ಮನದ ಶಾಂತಿ,
ಪ್ರೀತಿಯ ಉಡುಗೊರೆಯೇ ಯಾತನೆ
ತಡೆಯಲಾರದೆ ಗುಂಡಿಗೆಯ ಬೇನೆ
ನರಳುತ್ತಿರುವ ನೆನಪುಗಳು ಅಗಾಧ
ಶಮನವೆಂತು ಜೀವದ ಆರ್ತನಾದ
ಪ್ರಣಯದ ಬಾನಲ್ಲಿ ಹಾರಾಡಿ
ಬಸವಳಿದು ನಿಂತ ನೆಲದಲ್ಲೇ ಚೀರಾಡಿ
ಮಾಸದ ವೇದನೆಯದು ನನ್ನಲಿ
ಭಾವಗಳ ಪಾತವಿದು, ಹೇಗೆ ಹೇಳಲಿ.....??


No comments:

Post a Comment