Friday, February 3, 2012

ಗೆಳೆಯರ ಬಳಗ 


ಜೀವನದ ಅತೀ ಸಂತೋಷದ ದಿನಗಳೆಂದರೆ ಅದು ವಿದ್ಯಾರ್ಥಿ ದಿನಗಳು. ಈ ಮಾತುಗಳು ನನ್ನದಲ್ಲ. ಯಾಕೆಂದರೆ ನಾನಿನ್ನೂ ಜೀವನವನ್ನು ನೋಡುವುದು ಸಾಕಷ್ಟಿದೆ. ಮೇಲಿನ ಮಾತುಗಳು ಅನುಭವಸ್ಥರ ಅನುಭವದ ಮಾತು. ಅಂದರೆ ಅವರ ಪ್ರಕಾರ ನಾವೀಗ ಜೀವನದ ಅತ್ಯುನ್ನತ ಸಂತಸವನ್ನು ಅನುಭವಿಸುತ್ತಿದ್ದೇವೆ. ನಿಜವೇ..?? ಹೌದು.
       ನೀವು ಕಾಲೇಜಿಗೆ ಬಂದ ಮೊದಲ ದಿನವನ್ನೊಮ್ಮೆ ಯೋಚಿಸಿ ನೋಡಿ. 5 ನಿಮಿಷದಲ್ಲಿ ಇಡೀ ಕ್ಲಾಸ್ ನಿಮ್ಮ ಗೆಳೆಯರಾಗಿಬಿಟ್ಟರು. ಎಲ್ಲರೂ ಒಂದೇ ನಾವೆಲ್ಲಾ ಭಾರತೀಯರು ಎಂದು ನಿರೂಪಿಸಿದ ಒಂದೇ ದಿನ ಅದು. ಅಲ್ಲಿಂದ ನಿಮ್ಮ ಜೀವನದ ಪ್ರತಿಯೊಂದನ್ನೂ ಮೆಲುಕು ಹಾಕುತ್ತಾ ಹೋದರೆ ಸಂತಸದ ದಿನಗಳೇ ಸಿಗುತ್ತಾ ಹೋಗುತ್ತವೆ. ಎಲ್ಲಿಯೂ igo,frustration ಗೆ ಜಾಗವಿಲ್ಲ. ದುಃಖ ಬಂದಾಗಲೂ ಆನಂದ ಉಂಟಾದಾಗಲೂ ನಿಮ್ಮ ಬಳಿ ಇದ್ದ ಗೆಳೆಯರನ್ನು ನೆನಪಿಸಿ. ಅವರು ಹೇಳಿದ ಉತ್ತೇಜನ,ಸಾಂತ್ವನಗಳನ್ನ ಬೇರೆ ಯಾರಿಂದಲೂ ನೀಡಲು ಸಾದ್ಯವಿಲ್ಲ. ಏಕತೆಗೆ ಇರುವ ಏಕಮಾತ್ರ ಉದಾಹರಣೆ ವಿದ್ಯಾರ್ಥಿಗಳು.
                ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿ ನಾನಗಿದ್ದಾಗ ನನ್ನ ಮೇಷ್ಟ್ರು ನನಗೆ ಯಾವಾಗಲು chocolate ಕೊಡ್ತಾ  ಇದ್ರು. ನಾನು ಅದಕ್ಕಾಗಿಯೇ ಶಾಲೆಗೆ ಹೋಗುತ್ತಿದ್ದೆ ಅಂದರೆ ತಪ್ಪಲ್ಲ. ಶಿಕ್ಷಣದ ಮಾಲ್ಯ ಅರಿಯದ ಬಾಲ್ಯ ಅದು. ಆದರೂ ಆ ದಿನಗಳು ಹಿತವನ್ನೇ ನೀಡಿದ್ದವು. ಟೀಚರ್ ಹೊಡೆದಾಗ ಅತ್ತು, ಮತ್ತೆ ಸಮಾಧಾನ ಮಾಡಿದಾಗ ಖುಷಿಪಟ್ಟು ಉಲ್ಲಾಸಗೊಂಡ ದಿನಗಳವು.
   ಪ್ರೌಢ ಶಾಲೆಗೆ ಸೇರಿಕೊಂಡಾಗ ಪ್ರೌಡತೆ ಬಂದಷ್ಟೇ ಉತ್ಸಾಹಗೊಂಡಿದ್ದೆ. ನಿಜವಾಗಿ ಅದಿನ್ನೂ ಬಂದಿಲ್ಲ. ಆ ಮೂರು-ನಾಲ್ಕು ವರುಷ ಅತಿಯಾದ ದ್ವಂದ್ವದಲ್ಲಿ ಕಳೆದಿದ್ದೆ. ಒಂದಷ್ಟು ಗೆಳೆಯರ ಜೊತೆ ಸೇರಿ ಕೆಲವಷ್ಟು ಕಿತಾಪತಿ ಮಾಡಿ ಪ್ರಾಂಶುಪಾಲರ ಕೊಠಡಿಗೆ ದಿನಾ ಭೇಟಿ ನೀಡುತ್ತಿದ್ದೆ.  ಅವರಾದರೂ ಉದ್ದುದ್ದ ಭಾಷಣ ಬಿಟ್ಟು ನಮ್ಮನ್ನು ಮತ್ತಷ್ಟು ರೇಗಿಸುತ್ತಿದ್ದರು. ಆದರೆ ನಾವಾದರು ಏನು ಮಾಡಿಯೆವು..?? ಸಪ್ಪೆ ಮೋರೆ ಹಾಕಿ ಪುನಃ ತರಗತಿಯಲ್ಲಿ ಕುಳಿತುಕೊಳ್ಳದೆ ವಿಧಿಯಿಲ್ಲ. ನಾನು ನನ್ನ ಪ್ರೌಡ ಶಿಕ್ಷಣ ಹಾಸ್ಟೆಲ್ನಲ್ಲಿ ಮಾಡಿದ್ದಾದರಿಂದ ನಮ್ಮ ಮೇಷ್ಟ್ರ ಮನೆಗಳೂ ಪಕ್ಕದಲ್ಲೇ ಇದ್ದವು. ರಾತ್ರಿಯಾಗುತ್ತಿದ್ದಂತೆ ಒಂದಷ್ಟು ನಾವು ಗೆಳೆಯರು ಸೇರಿ ಅವರ ಮನೆಗೆ ಪಟಾಕಿ ಎಸೆಯುವುದು,,ಕಸದ ಬುಟ್ಟಿ ಎಸೆಯುವುದು ಮಾಡುತ್ತಿದ್ದೆವು. ಅನೇಕ ಬಾರಿ ನನ್ನ ತಂದೆಗೂ ನನ್ನಿಂದಾಗಿ ಮಂಗಳಾರತಿ ಆಗಿದ್ದುಂಟು. ಅಂತೂ ಇಂತೂ ಪ್ರೌಢ ಶಾಲೆ ಮುಗಿದಾಗ ಆದ ಸಂತಸ ಅಷ್ಟಿಷ್ಟಲ್ಲ. ನಿಜವಾದ ಕಾರಣ ನಾನಿನ್ನು ಕಾಲೇಜು ಸೇರುತ್ತೆನೆಂದು. 
       ಪ್ರಥಮ ಪಿಯುಸಿಗೆಂದು ಸುಬ್ರಹ್ಮಣ್ಯಕ್ಕೆ ತಂದೆ ನನ್ನನ್ನು ಸೇರಿಸುವಾಗ ಈ ಬಾರಿಯಾದರೂ ಯಾವುದೇ ಕಿತಾಪತಿ ಮಾಡಬೇಡ ಎಂದು ಪ್ರತ್ಯೇಕವಾಗಿ  ಹೇಳಿದ್ದರು. ಆದರೆ ಅದೆಲ್ಲ ಕಾಲೇಜಿನ ಹುಮ್ಮಸ್ಸಿನಲ್ಲಿ ಮಾಯವಾಗಿತ್ತು. ಪಕ್ಕದಲ್ಲೇ ಹರಿಯುವ ಕುಮಾರಧಾರ ನದಿಯ ಜುಳು ಜುಳು ನಿನಾದ ಕಿವಿ ಸೋಕುತ್ತಿತ್ತು. ಕೈ ಬೀಸಿ ಕರೆಯುತ್ತಿತ್ತು. 2  ಪಿಯುಸಿಯಂತು ಒಂದೇ ಒಂದು ದಿನ ಕ್ಲಾಸ್ ಕೇಳಿದ್ದು ನನಗೆ ನೆನಪಿಲ್ಲ. ಮನೆ ಬಿಟ್ಟು ಹೊರಟರೆ ಅದು ಸೀದಾ ನದಿ ತಟಕ್ಕಾಗಿರುತ್ತಿತ್ತು. 
    ಇಂತಿದ್ದ ನಾನು ಅದು ಹೇಗೋ ಪಿಯುಸಿ ಮುಗಿಸಿ ಡಿಗ್ರೀ ಗೆಂದು ಫಿಲೋಮಿನ ಕಾಲೇಜು ಪುತ್ತೂರು ಸೇರಿಕೊಂಡಾಗಲು ನನ್ನ ಕತೆ ಬಿನ್ನವಾಗಿರಲಿಲ್ಲ. ಮೊದಲೆರಡು ಸೆಮಿಸ್ಟರ್ dipartment  ನ  ಯಾವುದೇ ಉಪನ್ಯಾಸಕರನ್ನ ನನಗೆ ಪರಿಚಯವಾಗಿರಲಿಲ್ಲ. ನೋಡಿದರೆ ತಾನೇ..?? ಅಲ್ಲಿ ಬಳಿಯಲ್ಲಿ ಹೊಳೆ ಇಲ್ಲವಾದದ್ದರಿಂದ ಹುಡುಕಿಕೊಂಡು ಹೋಗ ಬೇಕಾಯಿತು.4 ನೆ ಸೆಮ್ ನಲ್ಲಿ ನೇತ್ರಾವತಿಗೆ ಈಜಲು ಹೋಗಿ ಒಬ್ಬ ಗೆಳೆಯನನ್ನು ಕಳೆದುಕೊಂಡೆ. ಅತಿಯಾಗಿದ್ದ ನನ್ನ ಮತ್ತು ಸಂಗಡಿಗರ ಉಪಟಳ ಅಲ್ಲಿಗೆ ಹೆಚ್ಚು ಕಮ್ಮಿ ಕೊನೆಗೊಂಡಿತು ಅಂದರೆ ತಪ್ಪಲ್ಲ. ಆದರೂ ಗೆಳೆಯರೊಂದಿಗೆ ಟೂರ್ ಇತ್ಯಾದಿಗಳು ತಪ್ಪಲಿಲ್ಲ. ಪ್ರತೀ ಶನಿವಾರ ಒಂದೊಂದು ಟ್ರಿಪ್ ಇರುತ್ತಿತ್ತು. ಹಾಗೋ ಹೀಗೋ ಡಿಗ್ರಿ ಮುಗಿಸಿದೆ.
   ಅಲ್ಲಿಗೆ ವಿದ್ಯಾರ್ಥಿ ಜೀವನ ಸಾಕು ಇನ್ನೇನಾದರು ಮಾಡೋಣ ಅಂತ ಕೆಲವು interview ಗೆ ಹೋದೆ ಅಲ್ಲೆಲ್ಲ ನಪಾಸ್ ಆದ ನಾನು ಮಾತ್ತೆ mca ಹೆಸರಲ್ಲಿ ನನ್ನ ವಿದ್ಯಾರ್ಥಿ ಜೀವನ ಆರಂಭಿಸಿದೆ.
ಈಗ ಮತ್ತೆ ಹೊಸ ಹುರುಪು ಉಲ್ಲಾಸಗಳಿಂದ ನನ್ನ ವಿದ್ಯಾರ್ಥಿ ಜೀವನವನ್ನು ಆನುಭವಿಸುತ್ತಿದ್ದೇನೆ. ಈ ಜೀವನ ನನಗೆ ಮರೆಯಲಾರದ ಹಲವು ಕ್ಷಣ ಗಳನ್ನೂ ಕೊಟ್ಟಿದೆ. ಅದಕ್ಕಾಗಿ ನಾನು ಎಂದಿಗೂ ಭಗವಂತನಿಗೆ ಆಭಾರಿ. ನನ್ನ ವಿದ್ಯಾರ್ಥಿ ಜೀವನವನ್ನು ಇಷ್ಟು ಸುಮಧುರವನ್ನಾಗಿಸಿದ ನನ್ನೆಲ್ಲ ಗೆಳೆಯರಿಗೂ ನಾನು ರಿಣಿ. ನನ್ನ ಮನವೆಂಬ ಪುಸ್ತಕದಲ್ಲಿ ಹರಿಯಲಾಗದ ಹಾಳೆಗಳಾಗಿ ಎಂದೆಂದಿಗೂ ಅವರನ್ನು ಕೊಂಡು ನಡೆಯುವೆ ನಾನು.  


No comments:

Post a Comment